ಶನಿವಾರ, ಜನವರಿ 14, 2012

ಸಂಭ್ರಮ

ಪುಟ ತಿರುವಿದಾಗೆಲ್ಲ
ಒಂದೊಂದು ಸಾಲು ಬರೆಯುತ್ತೇನೆ...
ತೆರೆಯಲು ಭಯ...ಸಾರಲು ಭಯ..
.ಮನದ ಮುಗಿಲಿಗೆ ಭೂಮಿ ಹಸಿರುಟ್ಟ ಸಂಭ್ರಮ...

ಬರೆದಾಗಲೆಲ್ಲ ಒಂದೊಂದು 
ಸೊಲ್ಲು ಸೇರಿಸುತ್ತೇನೆ..
ಸಾರಲು ಭಯ... ತಲೆದೂಗಲು ಭಯ...
ಮನದ ಬಿದಿರಿಗೆ ತಾನು ಹಾಡದ ಸಂಭ್ರಮ...

ಮೆರೆವಾಗಲೆಲ್ಲ ಒಂದೊಂದು
ಮೊರೆ ಸಲ್ಲಿಸುತ್ತೇನೆ...
ಕಾಡಲು ಭಯ... ಬೇಡಲು ಭಯ... 
ಮನದ ಗೆಜ್ಜೆಗೆ ಲಜ್ಜೆಗಳ ಹೆಜ್ಜೆಗೆ  ಎಗ್ಗಿಟ್ಟ ಸಂಭ್ರಮ...

ಬಿಕ್ಕಿ ಅಳುವಾಗೆಲ್ಲ ಹಲವು
ನಗೆಯ ಕೊಳ್ಳುತ್ತೇನೆ...
ಮಾತುಗಳ ಭಯ..ಮುರುಕು ಮೌನಗಳ ಭಯ...
ಮನದ ಹಕ್ಕಿಗೆ ನೆಲಿಯಲಿ ತೇಲಿ ತಾನ್ ಮರೆಯಾದ ಸಂಭ್ರಮ... 

ಎಲ್ಲಿ ಹೋಯಿತು ???

ಎಲ್ಲಿ ಹೋಯಿತು ???


ಎಲ್ಲಿ ಹೋಯಿತು
ನನ್ನ ಆ ಸರದ ಮುತ್ತು? 
ಎಷ್ಟು ಚಂದಿತ್ತು ಗೊತ್ತೇ?
ಕಳಕೊಂಡು ಬಿಟ್ಟೆ...

ಬೆರಳಿಗೂ ಸಾಥ್ ನೀಡುತ್ತಿತ್ತು
ಭಯವಾದಾಗ....
ಕೈಗೆ ಕೈ ಬೆಸೆಯುತ್ತಿತ್ತು 
ಖುಷಿಯಾದಾಗ...
ಯಾವಾಗಲೋ ಒಮ್ಮೆ ಜಡೆ ಮುತ್ತು ಕೂಡಾ
ಭಾನುವಾರ ಕನ್ನಡಿಯ ಮೂಲೆ ಮಾತ್ರ...

ಗೊತ್ತಿಲ್ಲ ಮುನಿಸು ನನಗೋ ಅದಕೋ...?
ಎಲ್ಲಿ ಪುಟಿಯಿತೋ  ಏನೊ 
ಕಸಕೋ ರಸಕೋ...
ವರುಷಗಳ ಮೀಲೋಮ್ಮೆ ಕಣ್ ತುಂಬಿ ಬಂದಾಗ 
ಹಸಿರೆಲೆಯ ತುದಿಯಿಂದ 
ಹನಿ ಉದುರಿ ಬಿತ್ತು....


ಎಲ್ಲಿ ಹೋಯಿತೋ ಏನೋ
ನನ್ನ ಆ ಸರದ ಮುತ್ತು....?