ಗುರುವಾರ, ಜೂನ್ 30, 2011

 ಮತ್ತಿನ್ನೇನಿದೆ 
ಬೇಸಿಗೆಯ ಬಡ ನೆಲ ಮನಸು,
ಒಂದಿಷ್ಟು ಕಳವಳ ಕುತೂಹಲ
 ಕಾರ್ಮೋಡಗಳ  ಕಂಡು....
ತಿಳಿಯದ ತಂಗಾಳಿಯ ಸನ್ನೆ,
ಆಗಾಗ ಮೊಳಗಿ ಮರೆಯಾಗುವ
ಗುಡುಗು ಮಿಂಚುಗಳ ಜಾಗಟೆ 
ಪ್ರೀತಿ ಮಾತಂತೆ 
ಇಳೆಗೆ ಮೊದಲ ಮಳೆ !
ಹಸಿರು ಎಲ್ಲೆಡೆ ಚಿಗುರಿತು 
ಮನದ ಮಂದಾರ ಅರಳಿತು!
ಮತ್ತಿನ್ನೇನಿದೆ???
ಬಿರುಬೇಸಿಗೆಯಂತೂ ದೂರಾಗತೊಡಗಿದೆ
ಬೆರಳೆಣಿಕೆಯೊಂದೇ ಬಾಕಿ,
ಸುರಿವ ಕನಸ ಮುಂಗಾರಿಗೆ....