ಶುಕ್ರವಾರ, ಜೂನ್ 10, 2011

ಕಾಡಿರದೆ  ಒಂದಿನಿತೂ....???

ಬರಿ ಕಲ್ಲುಗಳ ಬೋಳು ಬೆಟ್ಟ!
ಸಂದಿ ಗೊಂದಿಯಲ್ಲೇ ಚಿಗುರಿ ನಲಿವ
ಹಸಿರು,ಹೂವು!
ಪುಟ್ಟ ಮೆಟ್ಟಿಲುಗಳ ಅಪೂರ್ವ ಸ್ವಾಗತ..
ಪ್ರತಿ ಹೆಜ್ಜೆಗೂ ಕುತೂಹಲದ ಇಂಗಿತ!
ಸುತ್ತ ನೋಡಿದರೆ,      
ಸರ್ವಾಲಂಕಾರ ಭೂಷಿತೆ ಪೃಥ್ವಿ ದೇವಿ...! 
ಕೊಂಚ ಸಾಗಿ ಕತ್ತೆತ್ತಿದರೆ
ವಿರಾಜಮಾನ ಗೊಮ್ಮಟ ಮೂರ್ತಿ !                            
ಅದೆಷ್ಟೋ ಜನ ಪೂಜಿಸುತ್ತಿದ್ದಾರೆ,
ಬೇಡುತ್ತಿದ್ದಾರೆ, ಭಜಿಸುತ್ತಿದ್ದಾರೆ.....
ಏನಕ್ಕೂ ಏನು ಇಲ್ಲದಂತೆ
ನಿಂತಿದ್ದಾನೆ ಈತ ಎಂದಿನಂತೆ
ಮನದಲ್ಲೊಂದು ಗೊಂದಲದ ಸಂತೆ!
ಕಾಡಿರದೆ ಒಂದಿನಿತೂ ಆತನನು
ತಾನೇಕೆ ಹೀಗಾದೆನೆಂಬ ಚಿಂತೆ?...?

ಕಾಮೆಂಟ್‌ಗಳಿಲ್ಲ: